Tuesday, June 30, 2009

ನಮ್ಮ ಸಂಘದ ಬ್ಲಾಗ್ ಗೆ ಚಾಲನೆ

ಸಂವಹನ ಉದ್ದೇಶಕ್ಕಾಗಿಯೇ ಸೃಷ್ಟಿಯಾಗಿರುವ ನವ ಮಾಧ್ಯಮ (ಇಂಟರ್ ನೆಟ್ ಇತ್ಯಾದಿ)ಗಳ ಸದುಪಯೋಗಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘವೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬ್ಲಾಗ್ ಆರಂಭಿಸಿದ್ದೇವೆ.


ಜುಲೈ 1 ರಂದು ಪತ್ರಿಕಾ ದಿನಾಚರಣೆ. ಇದರ ಪ್ರಯುಕ್ತ ಬುಧವಾರ ಸಂಘದ ಆವರಣದಲ್ಲಿ ನಡೆಯುವ ಛಾಯಾಗ್ರಾಹಕರ ಛಾಯಾಚಿತ್ರಗಳ ಪ್ರದರ್ಶನ ಎರಡು ದಿನಗಳ ಕಾಲ ಕಳೆಗಟ್ಟಲಿದೆ. ಪ್ರದರ್ಶನವನ್ನು ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ಹಲವು ವರ್ಷಗಳ ಕಾಲದಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಂಗಳೂರಿನ ಬಾಲ್ಕೋ ಸ್ಟುಡಿಯೋದ ಶಾಂತರಾಮ ರಾವ್ ಅವರನ್ನು ಸನ್ಮಾನಿಸಲಾಗುತ್ತಿದೆ.

ಎರಡು ದಿನಗಳ ಕಾಲ ನಡೆಯುವ ಪ್ರದರ್ಶನಕ್ಕೆ ಸುಮಾರು 80 ಮಂದಿ ಪ್ರವೇಶ ಸಲ್ಲಿಸಿದ್ದಾರೆ. ಇದೊಂದು ಒಳ್ಳೆಯ ಪ್ರತಿಕ್ರಿಯೆ. ಇನ್ನು ಮುಂದೆಯೂ ಇಂಥದ್ದೇ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘವು ಹಮ್ಮಿಕೊಳ್ಳಲಿದೆ. ನಿಮ್ಮೆಲ್ಲರ ಸಹಕಾರವಿರಲಿ.

0 comments: