Wednesday, July 1, 2009

ಪತ್ರಿಕಾ ಛಾಯಾಗ್ರಾಹಕರ ಚಿತ್ರ ಪ್ರದರ್ಶನ

ಯಾವಾಗಲೂ ಎಲ್ಲೆಡೆ ನಡೆಯುವ ಕಾರ್ಯಕ್ರಮಗಳಿಗೆ, ಅಪಘಾತಗಳಿಗೆ ಸಾಕ್ಷಿಯಾಗುವ ಪತ್ರಿಕಾ ಛಾಯಾಚಿತ್ರಗ್ರಾಹಕರಿಗೆ ತಮ್ಮ ಅಮೂಲ್ಯ ಚಿತ್ರಗಳನ್ನು ಪ್ರದರ್ಶಿಸುವ ಅವಕಾಶ ಸೃಷ್ಟಿಯಾದ್ದು ಬುಧವಾರ, ಅದೂ ಪತ್ರಿಕಾದಿನಾಚರಣೆ ಸಂದರ್ಭದಲ್ಲಿ.
ಮಂಗಳೂರಿನ 10 ವೃತ್ತಿಪರ ಪತ್ರಿಕಾ ಛಾಯಾಗ್ರಾಹಕರು ಸೆರೆಹಿಡಿದ 91 ಚಿತ್ರಗಳು ಪ್ರದರ್ಶನಗೊಂಡವು.
ನಾರಾಯಣ ಬಾಳಿಲ, ಚಂದ್ರಹಾಸ ಕೋಟೆಕಾರ್, ಜಿ.ಕೆ.ಹೆಗಡೆ, ರಾಮಕೃಷ್ಣ ಭಟ್, ಸುಧಾಕರ ಎರ್ಮಾಳ್, ಅಹ್ಮದ್ ಅನ್ವರ್, ಸತೀಶ್ ಇರಾ, ರವಿ ಪೊಸವಣಿಕೆ, ದಯಾನಂದ ಕುಕ್ಕಾಜೆ ಮತ್ತು ಈಶ್ವರರಾಜ್ ಅವರ ಆಯ್ದ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.
ಸುದ್ದಿಚಿತ್ರಗಳು, ಕಲಾಶೈಲಿಯ ಚಿತ್ರಗಳೆರಡೂ ಸಮಾನ ಸಂಖ್ಯೆಯಲ್ಲಿದೆ.
ಹಿರಿಯಛಾಯಾಗ್ರಾಹಕ ಬಾಲ್ಕೊ ಸ್ಟುಡಿಯೋ ಮಾಲೀಕ ಶಾಂತಾರಾಮ ರಾವ್ ಉದ್ಘಾಟಿಸಿದರು. ಉದಯವಾಣಿ ಬ್ಯೂರೋ ಮುಖ್ಯಸ್ಥ ಮನೋಹರಪ್ರಸಾದ್ ಅವರು ದ.ಕ ಜಿಲ್ಲಾ ಪತ್ರಕರ್ತರ ಸಂಘದ ಬ್ಲಾಗಿಗೆ ಚಾಲನೆ ನೀಡಿದರು. ಹಿರಿಯ ಛಾಯಾಗ್ರಾಹಕ ಯಜ್ಞ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ ಹಾಜರಿದ್ದರು.

0 comments: